"ಮನೆಯೇ ಮಂತ್ರಲಾಯ ಮನಸ್ಸೇ ದೇವಾಲಯ' ಇದು ಹಿರಿಯರ ಅನುಭವದ ಮಾತು . ಹಾಗೆಯೇ ಮನೆಯೇ ಕೃಷಿಯ ಆಗರವಾದ್ದರೆ....? ಹೌದು ಮನೆಯ ತಾರಸಿ ಮೇಲೆ ಬಹು ದೊಡ್ಡ ತರಕಾರಿಗಳ ಸಾಮ್ರಾಜ್ಯ . ಈ ಹಸಿರ ತರಕಾರಿ ತೋಟ ಇರೋದು ಹಳ್ಳಿಯಲ್ಲಿ ಅಲ್ಲ ನಮ್ಮ ಮಂಗಳೂರು ನಗರದಲ್ಲಿ !
ಅರೆ ಈ ವಿಷಯ ಹೇಳಿದ್ರೆ ನಂಬೋದು ಕಷ್ಟನಾ? ಹಾಗಿದ್ರೆ ಒಮ್ಮೆ ಮರೋಳಿಯಲ್ಲಿರುವ ಕೃಷ್ಣಪ್ಪ ಗೌಡರವರ ಮನೆಗೆ ಒಮ್ಮೆ ಭೇಟಿನೀಡಿದರೆ ನಿಜ ವಿಷಯ ಗೊತ್ತಾಗುತ್ತದೆ . ಇವರು ಮೂಲತ: ಸುಳ್ಯ ತಾಲೂಕಿನ ಅಜ್ಜಾವರದ ಪಡ್ಡ೦ಬೈಲ್ ನವರು .ಸಣ್ಣ ಪ್ರಾಯದಲ್ಲಿಯೇ ಕೃಷಿ ಜೀವನದಲ್ಲಿ ಮೇಲೆ ಬಂದ ಇವರು ಉದ್ಯೋಗಕ್ಕಾಗಿ ಮಂಗಳೂರು ನಗರ ಸೇರಬೇಕಾಯಿತು . ನಗರದಲ್ಲಿ ಜೀವನ ನಡೆಸಿದರೂ ಅನುಭವಿಸಿ ಕೊಂಡು ಬಂದ ಕೃಷಿ ಬದುಕನ್ನು ಇವರು ಕೈ ಬಿಡಲಿಲ್ಲ .ಕೃಷ್ಣಪ್ಪರವರ ಹುಟ್ಟೂರು ಬೆಟ್ಟ ಗುಡ್ಡ ಸುತ್ತ ಹಸಿರು ತುಂಬಿದ ವಾತಾವರಣ . ನೆಂಟರ ,ಸ್ನೇಹಿತರ ಮನೆಯಿಂದ ಕಣ್ಣಿಗೆ ಬಿದ್ದ ಅನೇಕ ಸಸ್ಯಗಳನ್ನು ಈ ನಗರಕ್ಕೆ ತಂದು ತಾರಸಿಯಲ್ಲಿ ನೆಟ್ಟರು ಇದೇ ಮುಂದೆ ಕ್ಕೆ ಕಲ್ಪನೆಯ ತಾರಸಿ ತೋಟಕ್ಕೆ ನಾಂದಿಯಾಯಿತು.
ಇವರ ಮನೆ ಮಹಡಿಯ ಮೇಲೆ ಮೆಣಸು ,ಬದನೆ,ಬಸಳೆ ,ಮೂರು ವಿಧದ ಹರಿವೆ ,ದೊಡ್ಡ ಗಾತ್ರದ ಟೊಮೇಟೊ ,ಹೂ ಕೋಸು ,ಅಲಸಂಡೆ ,ಕುಂಬಳಕಾಯಿ ,ಹಾಗಲ ಕಾಯಿ ,ಮರಗೆಣಸು ,ಬೆಂಡೆಕಾಯಿ ,ಕರಿಮೆಣಸು ,ಜೋಳ ಪಪಾಯಿ ... ಹೀಗೆ ಅನೇಕ ಬಗೆಯ ವೈವಿಧ್ಯ ಕೃಷಿ ಯನ್ನು ಇಲ್ಲಿ ನೋಡಬಹುದು. ಹಾಗೆಯೇ ಈ ತರಕಾರಿ ತೋಟವನ್ನು ನೋಡಲು ಬಂದವನ್ನು ಬರೀ ಕೈಯಲ್ಲಿ ಕಳುಹಿಸುವುದಿಲ್ಲ .ಬದಲಾಗಿ ಯಾವುದಾದೊರೊಂದು ತರಕಾರಿಯನ್ನು ಕೊಟ್ಟೇ ಕೊಡುತ್ತಾರೆ .ಇವರದು ಪೂರ್ಣ ಪ್ರಮಾಣದ ಕೃಷಿ ಕೆಲಸವಲ್ಲ .ವೃತ್ತಿಯಲ್ಲಿ ಇವರು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ . ಈ ತರಕಾರಿಗಳಿಗೆ ಬೇಕಾಗುವ ಗೊಬ್ಬರವನ್ನು ಊರಿಗೆ ಹೋದಾಗ ತಯಾರಿಸಿಕೊಂಡು ಬರುತ್ತಾರೆ . ಇವರ ಪತ್ನಿ ಮೀನಾಕ್ಷಿಯವರು ಶಿಶು ಸಂರಕ್ಷಣಾ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕರಾಗಿ ದುಡಿಯುತ್ತಿದ್ದರೂ ,ತಮ್ಮ ಬಿಡುವಿನ ವೇಳೆಯಲ್ಲಿ ಇವರು ಕೃಷಿಗಾಗಿ ಕೆಲಸ ಮಾಡುತ್ತಾರೆ . ಸುಮಾರು ಹತ್ತು ವರ್ಷಗಳಿಂದ ತಾರಸಿ ಕೃಷಿಯಲ್ಲಿ ಅನುಭವನ್ನು ಹೊಂದಿದ್ದಾರೆ .
ತೋಟಗಾರಿಕೆ ಇಲಾಖೆಯು ಇವರ ತಾರಸಿ ತರಕಾರಿಯನ್ನು ನೋಡಿ ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ಸಬ್ಸಿಡಿಯನ್ನು ನೀಡಿದೆ . ಈ ಬಾರಿ ಜೋಳ ಎಲ್ಲರ ಗಮನ ಸೆಳೆದಿದೆ . ಈ ತಾರಸಿ ಕೃಷಿ ಮಾಡುವವರಿಗೆ ಉಚಿತವಾಗಿ ಮಾಹಿತಿಯನ್ನು ನೀಡುತ್ತಿದ್ದು ,ಆಸಕ್ತಿ ಇದ್ದವರಿಗೆ ತರಕಾರಿ ಬೀಜವನ್ನು ನೀಡುತ್ತಾರೆ . ಹಳ್ಳಿಯಲ್ಲಾದರೂ ಕೃಷಿ ಮಾಡೋದು ಸುಲಭ ಆದ್ರೆ ಈ ನಗರದಲ್ಲಿ ಈ ಬಿಸಿಲಿನ ಬೇಗೆಗೆ ತಾರಸಿಯಲ್ಲಿ ಕೃಷಿ ಮಾಡೋದು ದೊಡ್ಡ ಸವಾಲು . ಮುಂಜಾನೆ 4:30 ಕ್ಕೆ ಎದ್ದು ತಾರಸಿ ಕೆಲಸ ನಂತರ ಸಾಯಂಕಾಲ ತಾರಸಿಯಲ್ಲಿ ಕೆಲಸ ಮಾಡುತ್ತಾರೆ ಮೊನ್ನೆ ನಾನು ಕೂಡ ಇವರ ಮನೆಗೆ ಭೇಟಿ ನೀಡಿದೆ . ಟೈಮ್ ಇದ್ರೆ ನೀವು ಕೂಡ ಒಮ್ಮೆ ಹೋಗಿ ಅಥವಾ ನಮ್ಮ ಕೃಷ್ಣಪ್ಪ ಗೌಡರಿಗೆ ಒಮ್ಮೆ ಫೋನ್ ಮಾಡಿ ಇವರ ದೂರವಾಣಿ ಸಂಖ್ಯೆ :+919342990975
ಇನ್ನೂ ಕೆಲವು ಚಿತ್ರಗಳು:-
ಅರೆ ಈ ವಿಷಯ ಹೇಳಿದ್ರೆ ನಂಬೋದು ಕಷ್ಟನಾ? ಹಾಗಿದ್ರೆ ಒಮ್ಮೆ ಮರೋಳಿಯಲ್ಲಿರುವ ಕೃಷ್ಣಪ್ಪ ಗೌಡರವರ ಮನೆಗೆ ಒಮ್ಮೆ ಭೇಟಿನೀಡಿದರೆ ನಿಜ ವಿಷಯ ಗೊತ್ತಾಗುತ್ತದೆ . ಇವರು ಮೂಲತ: ಸುಳ್ಯ ತಾಲೂಕಿನ ಅಜ್ಜಾವರದ ಪಡ್ಡ೦ಬೈಲ್ ನವರು .ಸಣ್ಣ ಪ್ರಾಯದಲ್ಲಿಯೇ ಕೃಷಿ ಜೀವನದಲ್ಲಿ ಮೇಲೆ ಬಂದ ಇವರು ಉದ್ಯೋಗಕ್ಕಾಗಿ ಮಂಗಳೂರು ನಗರ ಸೇರಬೇಕಾಯಿತು . ನಗರದಲ್ಲಿ ಜೀವನ ನಡೆಸಿದರೂ ಅನುಭವಿಸಿ ಕೊಂಡು ಬಂದ ಕೃಷಿ ಬದುಕನ್ನು ಇವರು ಕೈ ಬಿಡಲಿಲ್ಲ .ಕೃಷ್ಣಪ್ಪರವರ ಹುಟ್ಟೂರು ಬೆಟ್ಟ ಗುಡ್ಡ ಸುತ್ತ ಹಸಿರು ತುಂಬಿದ ವಾತಾವರಣ . ನೆಂಟರ ,ಸ್ನೇಹಿತರ ಮನೆಯಿಂದ ಕಣ್ಣಿಗೆ ಬಿದ್ದ ಅನೇಕ ಸಸ್ಯಗಳನ್ನು ಈ ನಗರಕ್ಕೆ ತಂದು ತಾರಸಿಯಲ್ಲಿ ನೆಟ್ಟರು ಇದೇ ಮುಂದೆ ಕ್ಕೆ ಕಲ್ಪನೆಯ ತಾರಸಿ ತೋಟಕ್ಕೆ ನಾಂದಿಯಾಯಿತು.
![]() |
ತರಕಾರಿಯೊಂದಿಗೆ ಕೃಷ್ಣಪ್ಪ ಗೌಡರು |
ತೋಟಗಾರಿಕೆ ಇಲಾಖೆಯು ಇವರ ತಾರಸಿ ತರಕಾರಿಯನ್ನು ನೋಡಿ ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ಸಬ್ಸಿಡಿಯನ್ನು ನೀಡಿದೆ . ಈ ಬಾರಿ ಜೋಳ ಎಲ್ಲರ ಗಮನ ಸೆಳೆದಿದೆ . ಈ ತಾರಸಿ ಕೃಷಿ ಮಾಡುವವರಿಗೆ ಉಚಿತವಾಗಿ ಮಾಹಿತಿಯನ್ನು ನೀಡುತ್ತಿದ್ದು ,ಆಸಕ್ತಿ ಇದ್ದವರಿಗೆ ತರಕಾರಿ ಬೀಜವನ್ನು ನೀಡುತ್ತಾರೆ . ಹಳ್ಳಿಯಲ್ಲಾದರೂ ಕೃಷಿ ಮಾಡೋದು ಸುಲಭ ಆದ್ರೆ ಈ ನಗರದಲ್ಲಿ ಈ ಬಿಸಿಲಿನ ಬೇಗೆಗೆ ತಾರಸಿಯಲ್ಲಿ ಕೃಷಿ ಮಾಡೋದು ದೊಡ್ಡ ಸವಾಲು . ಮುಂಜಾನೆ 4:30 ಕ್ಕೆ ಎದ್ದು ತಾರಸಿ ಕೆಲಸ ನಂತರ ಸಾಯಂಕಾಲ ತಾರಸಿಯಲ್ಲಿ ಕೆಲಸ ಮಾಡುತ್ತಾರೆ ಮೊನ್ನೆ ನಾನು ಕೂಡ ಇವರ ಮನೆಗೆ ಭೇಟಿ ನೀಡಿದೆ . ಟೈಮ್ ಇದ್ರೆ ನೀವು ಕೂಡ ಒಮ್ಮೆ ಹೋಗಿ ಅಥವಾ ನಮ್ಮ ಕೃಷ್ಣಪ್ಪ ಗೌಡರಿಗೆ ಒಮ್ಮೆ ಫೋನ್ ಮಾಡಿ ಇವರ ದೂರವಾಣಿ ಸಂಖ್ಯೆ :+919342990975
ಇನ್ನೂ ಕೆಲವು ಚಿತ್ರಗಳು:-
No comments:
Post a Comment