ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Thursday, May 7, 2015

"ಮೈಕಾಲ್ತೊ ಪಲ್ಕ "ಮಂಗಳೂರಿನ ರೇಡಿಯೋ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬ್ಯಾರಿ ಭಾಷೆಯಲ್ಲಿ ಲೈವ್

 Maikaltho palka -byari language live program in radio sarang 107.8 Fm

-vk kadaba

ರೇಡಿಯೋ ಮೂಲಕ  ಮಾತು ಆರಂಭಿಸಿ ಕೇಳುಗರನ್ನು ಹಿಡಿದಿಟ್ಟುಕೊಳ್ಳುವುದು ಒಂದು ಸಾಹಸದ ಕೆಲಸ ! ನಮ್ಮ ಕುಡ್ಲದ ಸುತ್ತ ಮುತ್ತ ಕನ್ನಡ, ತುಳು ,ಕೊಂಕಣಿ ಮತ್ತು ಬ್ಯಾರಿ ಭಾಷೆಯಲ್ಲಿ ವ್ಯವಹರಿಸುವ ಜನರು ಅಲ್ಲಲ್ಲಿ ಸಿಕ್ಕೆ ಸಿಗುತ್ತಾರೆ . ಹಾಗೆಯೇ ನಮ್ಮ ಮಂಗಳೂರು ವ್ಯಾಪ್ತಿಯಲ್ಲಿ ಅನೇಕ  ರೀತಿಯ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ .ಅದರಲ್ಲಿಯೂ ಸ್ಥಳೀಯ ಭಾಷೆಗೆ ಹೆಚ್ಚು ಒತ್ತು  ನೀಡಿ  ಬಣ್ಣ ಬಣ್ಣದ ಕಾರ್ಯಕ್ರಮ ನೀಡುತ್ತಿರುವುದು ಮಂಗಳೂರಿನ ಜನರ ಮನೆ-ಮನದ  ಸಂಗಾತಿ ರೇಡಿಯೊ ಸಾರಂಗ್ 107.8 FM ಎಫ್ ಎಂ .ಮಂಗಳೂರಿನ ರೇಡಿಯೋ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬ್ಯಾರಿ ಭಾಷೆಯಲ್ಲಿ  ಲೈವ್  ಕಾರ್ಯಕ್ರಮ "ಮೈಕಾಲ್ತೊ ಪಲ್ಕ "ಹೌದು  ಈ ಕಾರ್ಯಕ್ರಮವನ್ನು ನಡೆಸುತ್ತಿರುವುದು  ಸೈಪುಲ್ಲ ಕುತ್ತಾರ್
SAIFULLA KUTHAR IN LIVE STUDIO
 .ಪ್ರತಿ ಶುಕ್ರವಾರ ಸಂಜೆ 5:00 PM ರಿಂದ 6:00 PM ರ ವರೆಗೆ  ಈ ಕಾರ್ಯಕ್ರಮ ಪ್ರಸಾರ ವಾಗುತ್ತಿದೆ .ಕಳೆದ  ಮೂರು ತಿಂಗಳಿನಿಂದ ಈ ಕಾರ್ಯಕ್ರಮ ರೇಡಿಯೋ  ಸಾರಂಗ್ 107.8 FMನಲ್ಲಿ ಮೂಡಿಬರುತ್ತಿದೆ . ಅಂದ ಹಾಗೆ "ಮೈಕಾಲ್ತೊ ಪಲ್ಕ "ಎಂದರೆ ಕನ್ನಡದಲ್ಲಿ "ಮಂಗಳೂರಿನ ಮಾತು "ಎಂದರ್ಥ . ಮನೋರಂಜನ ಕಾರ್ಯಕ್ರಮವಾದರೂ ಇಲ್ಲೊಂದು ಉದ್ದೇಶವಿದೆ . ಬ್ಯಾರಿ ಭಾಷೆಯ ಬಳಕೆ,ಬ್ಯಾರಿ ಭಾಷಿಕರ ಸಂಸ್ಕೃತಿ ,ಹಿನ್ನೆಲೆ, ಬದಲಾಗುತ್ತಿರುವ ಸಂಸ್ಕೃತಿ ,ಶೈಕ್ಷಣಿಕ ಸ್ಥಿತಿಗತಿ ,ವರದಕ್ಷಿಣೆ ,ಆಚರಣೆ ಹೀಗೆ ಎಲ್ಲವನ್ನು ಇಂದಿನ ಜಾಯಮಾನಕ್ಕೆ ಹೊಂದಿಸಿಕೊಂಡು ಹೋಗುವ ವಿಶೇಷ ಕಾರ್ಯಕ್ರಮವು  ಹೌದು .ಅನೇಕ ಬೇರೆಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬ್ಯಾರಿ ಸಮುದಾಯದ ಸಾಧಕರ  ಮಾತುಗಳು ಈ ಕಾರ್ಯಕ್ರಮದಲ್ಲಿ ಮೂಡಿಬರುತ್ತಿದೆ .
  ಹಿಂದೂ ,ಕ್ರೈಸ್ತ ,ಮುಸ್ಲಿಂ ಎಂಬ ಬೇಧ ವಿಲ್ಲದೆ ಅನೇಕ ಕೇಳುಗರ ಮೆಚ್ಚುಗೆಗೆ ಈ ಕಾರ್ಯಕ್ರಮ ಪಾತ್ರವಾಗಿದ್ದು ,ದಫ್ ಪಾಟ್ ,ಬ್ಯಾರಿ ಸಮುದಾಯದ ಹಾಡುಗಳು ಮಾತಿನ ಜೊತೆ ಜೊತೆಗೆ  ಪ್ರಸಾರವಾಗುತ್ತಿದೆ . ಮಾತಿನಲ್ಲಿ ಎಲ್ಲರನ್ನು ಸೆಳೆಯಬಲ್ಲ ಕಲೆ ಇವರಲ್ಲಿದೆ ಸ್ಥಳೀಯ ಭಾಷೆಯ ಮಾತಿನ ಇಂಪಿಗೆ ಮರುಳಾಗದವರು ಯಾರದಾರೂ ಇದ್ದಾರಾ ನಿವೇ ಹೇಳಿ  ?
ಇವರು ಓದಿದ್ದು ಬಿ.ಬಿ.ಎಂ. ಹಾಡುವುದು ,ಕತೆಬರೆಯುವುದು ,ಹಾಡು ರಚನೆ ಇದು ಸೈಪುಲ್ಲ ಕುತ್ತಾರ್ ರವರ ಹವ್ಯಾಸವಾಗಿದೆ .
 . ಸಾಮರಸ್ಯವನ್ನು ಬೆಸೆಯುವ ಮತ್ತು ಬ್ಯಾರಿ ಸಮುದಾಯದ ಏಳಿಗೆಗೆ ಜೊತೆಗೆ ಸಂಸ್ಕೃತಿಯ ಉಳಿವಿಗೆ ಈ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ  . vk kadaba 

No comments:

Post a Comment