ವಿ ಕೆ ಕಡಬ ಬ್ಲಾಗ್ ಗೆ ನಿಮಗೆ ಸ್ವಾಗತ... *ಬಯಸದೆ ಬ೦ದ ಗೌರವ *ಸೇಮಿಗೆ ಕೊಟ್ಟರೂ ನಾವು ಹೋಗಲಿಲ್ಲ...!*ನನ್ನನ್ನು ಫೇಸ್ ಬುಕ್ ನಲ್ಲಿ ಸಂಪರ್ಕಿಸಿ vk kadaba .ಕಣ್ಣು ಕಾಣದ ಹುಡುಗಿ ಬಿಸಿ ಬಿಸಿ ಚಹಾ ಮಾಡುವ ವೈಖರಿ ಇದು ಅನುಭವದ ಅನಾವರಣ* ತುಳುಟೆ ಕತೆ ಕೇನ್ಲೆ -ತುಳು ಕತೆಗಳು ಈಗ ವಿ.ಕೆ ಆಡಿಯೋ ಬ್ಲಾಗ್ ನಲ್ಲಿ ಲಭ್ಯ* ಪ್ರತಿ ಆದಿತ್ಯವಾರ ರೇಡಿಯೋ ಸಾರಂಗ್107.8FM ನಲ್ಲಿ11:30 ಕ್ಕೆ ಬಿನ್ನೆರೆ ಪಾತೆರಕತೆ *ಒಲವಿನ ಹಾಡು ಸೋಮವಾರದಿ೦ದ-ಶುಕ್ರವಾರದವರೆಗೆ ಪ್ರತಿದಿನ 3:00 ರಿಂದ4:00ರವರೆಗೆ ನಿಮ್ಮ ಮೆಚ್ಚುಗೆಯ ಹಾಡಿಗಾಗಿ ಕರೆ ಮಾಡಿ-0824-2449744 * ನಿಮ್ಮ ಮನೆಯಲ್ಲಿ ಬಜೆ ಇದೆಯಾ?

Thursday, January 22, 2015

ಯಾವಾಗ ಸೈನ್ಯ ಮತ್ತು ರೈತರಿಗೆ ತೊಂದರೆಯಾಗುತ್ತದೊ ಆಗ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ-ಶ್ರೀ ಬಾಲಚಂದ್ರ ರಾವ್ ಕೊಡಿಬೈಲ್

"ಯಾವಾಗ ಸೈನ್ಯ  ಮತ್ತು ರೈತರಿಗೆ ತೊಂದರೆಯಾಗುತ್ತದೊ ಆಗ ದೇಶದಲ್ಲಿ  ಶಾಂತಿ ನೆಲೆಸಲು ಸಾಧ್ಯವಿಲ್ಲ ". ಹೀಗೆಂದು ಮಾತು ಆರಂಭಿಸಿದವರು ಪ್ರಗತಿಪರ ಕೃಷಿಕ ಶ್ರೀ ಬಾಲಚಂದ್ರ  ರಾವ್ ಕೊಡಿಬೈಲ್ . ಮೊನ್ನೆ ಕೃಷಿ ಬದುಕಿನ ಏಳು ಬೀಳು ಗಳ ಬಗೆಗೆ ಸುಮಾರು ಒಂದು ಘಂಟೆ ಯ ಸಂದರ್ಶನದಲ್ಲಿ ಅನುಭವದ ಮಾತುಗಳನ್ನು ತೆರೆದಿಟ್ಟರು . ಹುಟ್ಟಿನಿಂದಲೇ  ಕೃಷಿ  ಪರಿಸರದಲ್ಲಿ ಬೆಳೆದಿರುವ ಇವರು ತನ್ನ ಬಾಲ್ಯವನ್ನು ಕಳೆದದ್ದು ಉಜಿರೆಯಲ್ಲಿ . ತೆಂಗು ,ಬಾಳೆ ,ಅಡಿಕೆ ಇವರ ಪ್ರಮುಖ ಬೆಳೆಗಳಾಗಿವೆ . ಹಳ್ಳಿ ಬದುಕಿನ ಕೃಷಿಕರು ಲಾಭ ನಷ್ಠ  ದ  ಲೆಕ್ಕಾಚಾರದಲ್ಲಿ ಬದುಕುವುದಿಲ್ಲ . ನೆಮ್ಮದಿಯ ಬದುಕೇ ಮುಖ್ಯವಾಗಿರುತ್ತದೆ .
ಪ್ರಶ್ನೆ :-ಬೇಕಾದಷ್ಟೂ  ಕೃಷಿ ಮೇಳ  ನಡೆದರೂ ಕೂಡ  ರೈತರು ಒಟ್ಟಿಗೆ ಸೇರುವುದು ಕಷ್ಟ ವಲ್ಲವೇ ?
ಉತ್ತರ :-ಹೌದು ಕೃಷಿಕನಿಗೆ ತನ್ನ  ಭೂಮಿಯಲ್ಲಿ ಬೇಕಾದಷ್ಟೂ  ಕೆಲಸವಿರುತ್ತದೆ ,ಕೃಷಿ ಮೇಳ ಗಳೆಲ್ಲವೂ ಇತ್ತೀಚೆಗೆ ರಾಜಕೀಯ ಲಾಭಕಾಗಿ ನಡೆಯುತ್ತಿದೆ. ರೈತನಿಗೆ ಸಮಯ ಮುಖ್ಯ . ತೋಟ ದಲ್ಲಿ ಇರುವಾಗ ಹೊಸ ಆಲೋಚನೆ ಗಳು ಅಲ್ಲೇ ಬರುತ್ತವೆ .
ಪ್ರಶ್ನೆ:-ಕೃಷಿಕರಿಗೆ ತರಬೇತಿಯ ಅಗತ್ಯ ಇದೆಯಾ?
ಕೆಲವೊಮ್ಮೆ ಬೇಕು ,ಆದರೆ ಹೆಚ್ಚಾಗಿ ಬೇಕಾಗಿಲ್ಲ . ಅನುಭವಕ್ಕಿಂತ ಮಿಗಿಲಾದ ತರಬೇತಿ ಯಾವುದಾದರು ಇದೆಯೇ
ಹೀಗೆ ಕೇಳಿದ ಪ್ರಶ್ನೆಗೆಲ್ಲ  ಬಹಳ ಸುದೀರ್ಘ  ಉತ್ತರಗಳನ್ನೇ ಕೊಟ್ಟರು .
ಧಾರ್ಮಿಕ ಪ್ರವಚನಗಳನ್ನು ಕೂಡ ಇವರು ನಡೆಸುತ್ತಾರೆ .ಕಡಬದ ನಾಲೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರತಿ ಗುರುವಾರದ ಭಜನೆಯೊಂದಿಗೆ ಪೂಜೆಯನ್ನು ನಡೆಸಿಕೊಡುತ್ತಾರೆ .ಹರಿಕಥೆ ಕೇಳುವುದೆಂದರೆ  ಇವರಿಗೆ ಅಚ್ಚು ಮೆಚ್ಚು . ಶಾಲಾ ಸಮಯದಲ್ಲಿ ಅನೇಕ ಯಕ್ಷಗಾನ ವೇಷ ಗಳಿಗೆ ಜೀವ ತುಂಬಿದ್ದಾರೆ .ಇವರನ್ನು ರೇಡಿಯೋ  ಸಾರಂಗ್ ಗೆ ಪರಿಚಯಿಸಿದವರು ಶ್ರೀ ಶಶಿ ಗಿರಿವನ ಕಡಬ 

No comments:

Post a Comment